ಇದಾಗಿ ಶಿವಕುಮಾರ್, ಅನಿಲ್ ಗೆ ಬಿಲ್ ಪಾವತಿಸಲು ಒತ್ತಾಯಿಸಿದ್ದಾನೆ. ಆಗ ಅನಿಲ್ ನಿರಾಕರಿಸಿದ್ದು ಉದ್ರೇಕಗೊಂಡ ಶಿವಕುಮಾರ್ ಅವನನ್ನು ಬಾರ್ ನಿಂದ ಹೊರಗೆಳೆದು ತಂದು ರಸ್ತೆಯಲ್ಲಿ ಬಿದ್ದ ಕಲ್ಲೊಂದನ್ನು ಎತ್ತಿ ಅನಿಲ್ ತಲೆಗೆ ಹೊಡೆದಿದ್ದಾನೆ. ಕಲ್ಲಿನ ಏಟಿನಿಂದ ಗಂಭೀರವಾಗಿ ಗಾಯಗೊಂಡ ಅನಿಲ್ ತಲೆಯಲ್ಲಿ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದರ ಬಳಿಕ ಶಿವಕುಮಾರ್ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೋಲೀಸರು ಹೇಳಿದರು.