ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು

ಬೆಂಗಳೂರಿನಲ್ಲಿ ನಡೆದ ಹಿಟ್ ಅಂಡ್‌ ರನ್ ಪ್ರಕರಣವೊಂದರಲ್ಲಿ ಪೋಲೀಸ್ ಮುಖ್ಯ ಪೇದೆಯೊಬ್ಬರು ಮೃತಪಟಿದ್ದಾರೆ.
ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು
ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹಿಟ್ ಅಂಡ್‌ ರನ್ ಪ್ರಕರಣವೊಂದರಲ್ಲಿ ಪೋಲೀಸ್ ಮುಖ್ಯ ಪೇದೆಯೊಬ್ಬರು ಮೃತಪಟಿದ್ದಾರೆ. 
ಬೆಂಗಳೂರು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್‍ಸ್ಟೆಬಲ್ ರವಿಶಂಕರ್ ಸಾವನ್ನಪ್ಪಿದ್ದಾರೆ.ಜತೆಯಲ್ಲಿದ್ದ ಇನ್ನೋರ್ವ ಹೋಮ್‌ ಗಾರ್ಡ್‌ ವೆಂಕೋಬ್‌ ರಾವ್‌ ಅವರಿಗೆ ಗಾಯಗಳಾಗಿದೆ.
ಶನಿವಾರ ಮಧ್ಯಾಹ್ನ 12.45 ರ ಸಮಯದಲ್ಲಿ ರವಿಶಂಕರ್ ಹೊಸಕೆರೆ ಹಳ್ಳಿ ಬಳಿಯ ನೈಸ್‍ರಸ್ತೆ ಜಂಕ್ಷನ್ ಸಮೀಪ ಹೋಗುತ್ತಿದ್ದಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿದೆ. ಹೀಗೆ ಡಿಕ್ಕಿ ಹೊಡೆದ ರಭಸಕ್ಕೆ ಪೇದೆ ರವಿಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಹೀಗೆ ಗುದ್ದಿದ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಬ್ಯಾಟರಾಯನಪುರ ಪೋಲೀಸರು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com