ಸಚಿವ ಸಂಪುಟ ತೀರ್ಮಾನವು ರಾಜ್ಯದ ಇತಿಹಾಸದಲ್ಲಿಯೇ ಸ್ಮರಣೀಯ, ಐತಿಹಾಸಿಕ ದಿನ. ಬಸವಣ್ಣ ಹಾಗೂ ಶರಣರು ಮಾನವ ಧರ್ಮ ಹುಟ್ಟು ಹಾಕಿ, ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಪ್ರತಿಯೊಬ್ಬರೂ ಸಮಾನರು ಎಂದು ಸಾರಿದ್ದರು. 900 ವರ್ಷಗಳ ಬಳಿಕ ಮತ್ತೊಮ್ಮೆ ನಮ್ಮ ಮೂಲ ಧರ್ಮಕ್ಕೆ ಮಾನ್ಯತೆ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.