"ಘಟನೆ ನಡೆಯುವ ಸ್ವಲ್ಪ ಮುನ್ನ ಕಲೀಮ್ ತಲೆನೋವು ಎಂದು ಕೋಣೆಯಲ್ಲಿ ಮಲಗಿದ್ದ. ನಾನು ಅಂಗಡಿ ನೋಡಿಕೊಲ್ಳುತ್ತಿದ್ದೆ. ನನ್ನ ಹಿರಿಯ ಮಗ ಬೈಕ್ ರಿಪೇರಿ ಕೆಲಸಕ್ಕೆ ತೆರಳಿದ್ದ, ಪತಿ ವ್ಯಾಪಾರಕ್ಕಾಗಿ ಹೋಗಿದ್ದರು. ಪುತ್ರಿಯರಿಬ್ಬರೂ ಶಾಲೆಗೆ ಹೋಗಿದ್ದರು. ನಾನು ಬೆಂಕಿ ಕಾಣಿಸಿಕೊಳ್ಳುತ್ತಲೇ ಅನಾಹುತವಾಗಿದೆ ಎಂದು ಕಿರುಚಿದೆ. ಆದರೆ ಬೆಂಕಿ ದೊಡ್ಡ ಪ್ರಮಾಣದಲ್ಲಿದ್ದ ಕಾರಣ ಯಾರೂ ಕೋಣೆಗೆ ತೆರಳಿ ಅವನನ್ನು ಎಬ್ಬಿಸಲಾಗಲಿಲ್ಲ. ಆತ ನಿಶ್ಚಲನಾಗಿ ಬಿದ್ದಿದ್ದ. ಅವನನ್ನು ಸ್ಥಳೀಯಆಸ್ಪತ್ರೆಗೆ ಕರೆದೊಯ್ದಾಗ ಅವನಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು" ಕಲೀಮ್ ತಾಯಿ ಶಕೀಲಾ ತಿಳಿಸಿದರು.