ಮಂಗಳವಾರದಿಂದ ಕಲ್ಲೇಶ್ ಗೌಡ ನಾಪತ್ತೆಯಾಗಿದ್ದ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆತನ ಪೋಷಕರು ದೂರು ದಾಖಲಿಸಿದ್ದರು, ಪಾರ್ಕ್ ನಲ್ಲಿ ಶವ ನೇತಾಡುತ್ತಿದ್ದುದ್ದನ್ನು ನೋಡಿದ ಸ್ಥಳೀಯರು, ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು, ಕಲ್ಲೇಶ್ ಗೌಡ ಬರೆದಿರುವ ಡೆತ್ ನೋಟ್ ನಲ್ಲಿ, ಹಣಕಾಸಿನ ವಿಚಾರವಾಗಿ ಆತನ ಹಿರಿಯ ಸಹೋದ್ಯೋಗಿಗಳಾದ ರಾಜಶೇಖರ್ ಮತ್ತು ರಘುನಾಥ್ ಆತನಿಗೆ ಕಿರುಕುಳ ನೀಡುತ್ತಿದ್ದರು ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.