ಸರಿಯಾದ ಅಭ್ಯರ್ಥಿಗಳನ್ನು ಜನತೆ ಚುನಾಯಿಸಬೇಕು- ಹೆಚ್ .ಎಸ್. ದೊರೆಸ್ವಾಮಿ

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಸರಳ ವ್ಯಕ್ತಿಯಾಗಿದ್ದರು. ಆದರೆ. ದೇಶದ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.
ಎಚ್. ಎಸ್. ದೊರೆಸ್ವಾಮಿ
ಎಚ್. ಎಸ್. ದೊರೆಸ್ವಾಮಿ

ಬೆಂಗಳೂರು:  ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಸರಳ ವ್ಯಕ್ತಿಯಾಗಿದ್ದರು. ಆದರೆ. ದೇಶದ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.

ಸರ್ಕಾರಿ ಕಲಾ ಕಾಲೇಜಿನಲ್ಲಿ ಜಿ. ಕೆ. ಗೋಖಲೆ ಹಾಗೂ ಗಾಂಧಿ ಅವರ ಗುರು ಮತ್ತು ಶಿಸ್ತು ವಿಶೇಷ ಪೋಸ್ಟಲ್ ಕಾವರ್  ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಜನರಿಂದ ಆಯ್ಕೆಯಾಗುವ ರಾಜಕಾರಣಿಗಳು ಹಣ ಮಾಡುವುದರಲ್ಲಿಯೇ ಆಸಕ್ತಿ ಹೊಂದಿದ್ದಾರೆ. ಜನರ ಕಲ್ಯಾಣದಲ್ಲಿ ಅವರಿಗೆ ಆಸಕ್ತಿ ಇಲ್ಲ ಎಂದರು.

ಆದರೆ. ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರು ಸೂಕ್ತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅವರು ಮನವಿ ಮಾಡಿಕೊಂಡರು.

 ಕರ್ನಾಟಕ ವಲಯದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್  ಚಾರ್ಲ್ಸ್  ಲೊಬೊ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com