ಬೆಂಗಳೂರು: ಯಲಹಂಕ ಬಳಿ ಜಮೀನ್ದಾರನ ಅಪಹರಿಸಿ, ಹತ್ಯೆ

ಜಮೀನ್ದಾರರೊಬ್ಬರನ್ನು ಅಪಹರಿಸಿ, ಅವ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ, ಬಳಿಕ ಕತ್ತು ಬಿಗಿದು ಕೊಲೆ ಮಾಡಿರುವ ....
ವೆಂಕಟಪತಿ
ವೆಂಕಟಪತಿ
ಬೆಂಗಳೂರು: ಜಮೀನ್ದಾರರೊಬ್ಬರನ್ನು ಅಪಹರಿಸಿ, ಅವ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ, ಬಳಿಕ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಜಮೀನ್ದಾರ ಸಂಪಿಗೆಹಳ್ಳಿಯ ವೆಂಕಟೇಶ್ವರನಗರ ನಿವಾಸಿ ವೆಂಕಟಪತಿ (52) ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ವೆಂಕಟಪತಿ ಕಾಣೆಯಾಗಿದ್ದಾರೆ ಎಂದು ಅವರ ಅಳಿಯ ಅವಿನಾಶ್ ಅವರು ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇಂದು ಮುಂಜಾನೆ 1.30ರ ವೇಳೆಗೆ ವೆಂಕಟಪತಿಯವರ ಶವ ದೊಡ್ಡಬಳ್ಳಾಪುರ ಸಿಆರ್‍ಪಿಎಫ್ ರಸ್ತೆಯಿಂದ ಮಾವಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಪತ್ತೆಯಾಗಿತ್ತು. ಅವರ ಮೈಮೇಲಿದ್ದ 8 ಚಿನ್ನದ ಉಂಗುರ, ಕುತ್ತಿಗೆಯ ಚೈನ್, ಒಂದು ಬ್ರೇಸ್‍ಲೆಟ್, ರ್ಯಾಡೋ ವಾಚ್ ಅನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ದುಷ್ಕರ್ಮಿಗಳು ವೆಂಕಟಪತಿಯವರನ್ನು ಅಪಹರಿಸಿ ಚಿನ್ನಾಭರಣ ದೋಚಿ ಕೊಲೆ ಮಾಡಿ, ಶವವನ್ನು ದೊಡ್ಡಬಳ್ಳಾಪುರದ ಬಳಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com