ಸಂಗ್ರಹ ಚಿತ್ರ
ರಾಜ್ಯ
'ಕರ್ಣ'ನ ಮನೆಯಲ್ಲಿ ಆವರಿಸಿದ ನೀರವ ಮೌನ: 'ಆಪ್ತಮಿತ್ರ'ನ ಮನೆಯಿಂದ ಅಂಬಿ ಕುಟುಂಬಕ್ಕೆ ಊಟ
ಅಂಬರೀಷ್ ಇಲ್ಲದೆ ಜೆ.ಪಿ.ನಗರದಲ್ಲಿರುವ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ದುಃಖದಲ್ಲಿರುವ ಅಂಬಿ ಕುಟುಂಬಸ್ಥರಿಗೆ ನಟಿ ಭಾರತಿ ವಿಷ್ಣುವರ್ಧನ್ ಅವರು ಮಧ್ಯಾಹ್ನದ ಊಟ ಕಳುಹಿಸಿಕೊಡುವ ಮೂಲಕ ಸಾಂತ್ವನ ಹೇಳಿದ್ದಾರೆ...
ಬೆಂಗಳೂರು: ಅಂಬರೀಷ್ ಇಲ್ಲದೆ ಜೆ.ಪಿ.ನಗರದಲ್ಲಿರುವ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ದುಃಖದಲ್ಲಿರುವ ಅಂಬಿ ಕುಟುಂಬಸ್ಥರಿಗೆ ನಟಿ ಭಾರತಿ ವಿಷ್ಣುವರ್ಧನ್ ಅವರು ಮಧ್ಯಾಹ್ನದ ಊಟ ಕಳುಹಿಸಿಕೊಡುವ ಮೂಲಕ ಸಾಂತ್ವನ ಹೇಳಿದ್ದಾರೆ.
ಸುಮಲತಾ ಹಾಗೂ ಅಭಿಷೇಕ್ ಗೌಡ ಅವರು ಮನೆಯೊಡನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಸೋಮವಾರವಷ್ಟೇ ಅಂಬರೀಷ್ ಅವರ ಅಂತ್ಯಕ್ರಿಯೆಯಾಗಿದ್ದು, ಸಂಪ್ರದಾಯದಂತೆ ಇಂದು ಮನೆಯಲ್ಲಿ ಯಾರೂ ಅಡುಗೆ ಮಾಡುಂತಿಲ್ಲ. ಹೀಗಾಗಿ ಇದನ್ನು ಅರಿತ ಭಾರತಿ ವಿಷ್ಣು ವರ್ಧನ್ ಅವರು ತಮ್ಮ ಪಿಎಯಿಂದ ಅಂಬರೀಷ್ ಅವರ ಮನೆಗೆ ಊಟ ಕಳುಹಿಸಿಕೊಟ್ಟಿದ್ದಾರೆ. 2 ಕ್ಯಾರಿಯರ್'ಗಳಲ್ಲಿ ತಮ್ಮ ಮನೆಯಿಂದ ಭಾರತಿಯವರು ಊಟವನ್ನು ಕಳುಹಿಸಿದ್ದಾರೆ.
ವಿಷ್ಣು ವರ್ಧನ್ ಹಾಗೂ ಅಂಬರೀಷ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಕುಟುಂಬದವರೂ ತುಂಬಾ ಆತ್ಮೀಯರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ