ಘಟನೆ ಕುರಿತು ಶ್ರಾವಣಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮಗುವಿಗೆ ವಿಷ ಹಾಕಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಡಿದ್ದಾಳೆಂದು ಹೇಳಿದ್ದರು. ಯಾರ ಮೇಲೂ ಸಂಶಯವನ್ನು ವ್ಯಕ್ತಪಡಿಸಿರಲಿಲ್ಲ. ಆದರೆ, ತನಿಖೆ ನಡೆಸಲು ಆರಂಭಿಸಿದ್ದ ಪೊಲೀಸರಿಗೆ ಹಲವು ಶಂಕೆಗಳು ಮೂಡಿದ್ದವು. ಶ್ರಾವಣಿ ಕುತ್ತಿಗೆಯಲ್ಲಿ ಸೀಳಿರುವ ಗುರುತುಗಳು ಪತ್ತೆಯಾಗಿದ್ದವು.