ಸಾರ್ವಜನಿಕರ ಸಹಾನುಭೂತಿ ಗಳಿಸುವ ಸಲುವಾಗಿ ಅವರು ಇಂತಹ ಕತೆಗಳನ್ನು ಕಟ್ಟುತ್ತಿರುತ್ತಾರೆ. ಇಂತಹ ಆರೋಪಗಳು ಕೇಳಿಬಂದಾಗ ತನಿಖೆಗೆ ಆದೇಶಿಸಲಾಗುತ್ತದೆ. ಇದರಿಂದ ನಮ್ಮ ಗಮನ ಹಾಗೂ ಸಮಯ ಬೇರೆಡೆಗೆ ತಿರುಗುತ್ತದೆ. ಈ ವೇಳೆ ಆರೋಪಿಗಳು ಇದರಿಂದ ಲಾಭ ಪಡೆಯಲು ಯತ್ನಿಸುತ್ತಾರೆ. ವಾಗ್ಮೋರೆಯನ್ನು ಹಲವು ಬಾರಿ ನ್ಯಾಯಮೂರ್ತಿಗಳ ಬಳಿ ಹಾಜರು ಪಡಿಸಿದ್ದೆವು. ಆದರೆ, ಆತ ಒಂದೂ ಬಾರಿ ಕೂಡ ನ್ಯಾಯಮೂರ್ತಿಗಳ ಬಳಿ ಈ ರೀತಿ ಹೇಳಿಕೆ ನೀಡಿರಲಿಲ್. ಆದರೆ, ಇದೀಗ ಇದ್ದಕ್ಕಿದ್ದಂತೆ ಆರೋಪಗಳನ್ನು ಮಾಡಲು ಆರಂಭಿಸಿದ್ದಾನೆ. ಆತನ ಪರ ವಕೀಲ ಈ ವರೆಗೂ ಮೂರು ಬಾರಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಆಗೇಕೆ ಈ ರೀತಿಯ ಆರೋಪಗಳ ಬಗ್ಗೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.