ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿರುವ ರಮಾನಂದ್ ಸದ್ಯ ಅಪಘಾತವಾಗಿ ತಮ್ಮ ಎರಡು ಕಾಲನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನೋಪಾಯಕ್ಕಾಗಿ ಸಾಲಸೋಲ ಮಾಡಿ ರಮಾನಂದ್ ಆಟೋ ರಿಕ್ಷಾವನ್ನು ಕೊಂಡು ಓಡಿಸುತ್ತಿದ್ದರು. ವಿಧಿಯಾಟ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತದಲ್ಲಿ ರಮಾನಂದ್ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.