11 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಕಾಶ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಈಗ ತನ್ನದಲ್ಲದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎನ್ನುತ್ತಿರುವ ಪ್ರಕಾಶ್ ಬಡತನದ ಹಿನ್ನೆಲೆ ಹೊಂದಿದ್ದಾರೆ. ಪ್ರಕಾಶ್ ಅವರ ಬೆಂಬಲಕ್ಕೆ ಪ್ರಯಾಣಿಕರೂ ಸಹ ಧಾವಿಸಿದ್ದು, ಪ್ರಕಾಶ್ ಅವರ ತಪ್ಪು ಇಲ್ಲ ಎಂದಿದ್ದಾರೆ. ಮಂಗ ಸ್ಟಿಯರಿಂಗ್ ಮೇಲೆ ಕೂತಿದ್ದ ಘಟನೆ ಆಕಸ್ಮಿಕವಾದದ್ದು ಪ್ರಕಾಶ್ ಉತ್ತಮ ಚಾಲಕ, ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಪ್ರತಿ ದಿನ ಬಸ್ ನಲ್ಲಿ ಪ್ರಯಾಣಿಸುವ ತಿಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.