ರೌಡಿ ರಂಗನಾಗಿದ್ದ ಆನೆ ನಂತರ ಬರೀ ರಂಗನಾದ ಕಥೆ ಬಲು ರೋಚಕವಾಗಿದೆ. ಹೌದು ಬನ್ನೇರುಘಟ್ಟದಲ್ಲಿ ಆತನ ಪುಂಡಾಟ ಕಂಡು ಅವನಿಗೆ ರೌಡಿ ರಂಗ ಅಂತ ಹೆಸರಿಡಲಾಗಿತ್ತು. ಆದರೆ ಮತ್ತಿಗೋಡು ಶಿಬಿರಕ್ಕೆ ಬಂದ ನಂತರ ಆನೆಯ ರೌಡಿ ಚೆಷ್ಟೇಗಳು ಕಮ್ಮಿಯಾಗಿದ್ದವು. ಇಲ್ಲಿಗೆ ಬಂದ ಮೇಲೆ ಒಂದು ದಿನವೂ ಆತನನ್ನು ಕ್ರಾಲ್ ಗೆ ಹಾಕಿರಲಿಲ್ಲ. ಸೌಮ್ಯ ಸ್ವಭಾವ ಇದ್ದ ಕಾರಣ ರೌಡಿ ರಂಗ ಅನ್ನೋದನ್ನ ತೆಗೆದು ಕೇವಲ ರಂಗ ಅಂತ ಮಾತ್ರ ಹೆಸರು ಇಟ್ಟಿದ್ದೇವು ಅಂತ ಮಾವುತ ಅಹಮ್ಮದ್ ಷರೀಫ್ ಹೇಳುತ್ತಾರೆ.