ಬೆಂಗಳೂರು ದಕ್ಷಿಣ ವಿಭಾಗದ ಸುಂಕದಕಟ್ಟೆ ಸರ್ವೆ ನಂ 37 ರಲ್ಲಿ ರವೀದ್ರ ಕುಮಾರ್ ಸುಮಾರು 130 ಎಕೆರೆ ಜಾಗವನ್ನು ವಶ ಪಡಿಸಿಕೊಂಡಿದ್ದರು. ಹೀಗಾಗಿ ಕೆಲವು ಶಾಸಕರು ಅವರನ್ನು ವರ್ಗಾವಣೆ ಮಾಡುವಂತೆ ಸಿಎಂ ಕುಮಾರ ಸ್ವಾಮಿ ಅವರಿಗೆ ಒತ್ತಾಯಿಸಿದ್ದರು, ಆದರೆ ರವೀಂದ್ರ ಕುಮಾರ್ ಅವರನ್ನು ವರ್ಗಾವಣೆ ಮಾಡುವುದು ಬೇಡ ಎಂದು ಸಚಿವರು ತಡೆ ಹಿಡಿದಿದ್ದಾರೆ, ಇದರಲ್ಲಿ ಹೆಚ್ಚಿನ ರಾಜಕೀಯ ಒತ್ತಡವಿದ್ದು, ಮುಂದಿನ ಆದೇಶ ಬರುವವರೆಗೂ ರವಿಂದ್ರ ಕುಮಾರ್ ಸದ್ಯ ಇರುವ ಹುದ್ದೆಯಲ್ಲಿಯೇ ಬೆಂಗಳೂರಿನಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ,