ದಸರಾ ಸಂಭ್ರಮದ ವೇಳೆ ಸ್ಥಳದಲ್ಲಿದ್ದ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನನ್ನನ್ನು ಕೆಟ್ಟಾದಾಗಿ ಮುಟ್ಟಿದ. ಬಳಿಕ ಸ್ಥಳದಲ್ಲಿ ಹೆಚ್ಚು ಜನ ನೆರೆದಿದ್ದರಿಂದ ತಲೆಮರೆಸಿಕೊಂಡ. ಈ ಘಟನೆ ಸಾಕಷ್ಟು ಆಘಾತವನ್ನುಂಟು ಮಾಡಿದೆ. ಆತನ ವರ್ತನೆ ಕಂಡ ಕೂಡಲೇ ನನಗೇನು ಮಾಡಬೇಕೆಂದು ತಿಳಿಯಲಿಲ್ಲ. ಆತನಿಗಾಗಿ ನನ್ನ ಸ್ನೇಹಿತರು ಸಾಕಷ್ಟು ಹುಡುಕಾಟ ನಡೆಸಿದರು. ಆದರೆ, ಆತ ಸಿಗಲಿಲ್ಲ ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ.