ಶನಿವಾರ ಸಂಜೆ ಇಂಪಾಲ್ ಮಾರುಕಟ್ಟೆಯಿಂದ ದ ಹ್ಯಾಂಡ್ ಗ್ರೆನೇಡ್ ಲೋಡ್ ಮಾಡಿ ಕಾಂಗ್ಲಾಟೊಂಬಿ ತರಬೇತಿ ಶಿಬಿರಕ್ಕೆ ತೆರಳುತ್ತಿದ್ದಾಗ ಗ್ರೆನೇಡ್ ಸ್ಪೋಟವಾಗಿದೆ. ಆ ಸಮಯಕ್ಕೆ ಸರಿಯಾಗಿ ಯೋಧ ಉಮೇಶ್ ತಾವಿದ್ದ ಕಂಟೇನರ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗ್ರೆನೇಡ್ ಸಮೇತ ಹೊರಕ್ಕೆ ಜಿಗಿದ ಉಮೇಶ್ ವಾಹನದಲ್ಲಿದ್ದ ಸುಮಾರು 20 ಮಂದಿಯ ಪ್ರಾಣ ರಕ್ಷಿಸಿ ತಾವು ಪ್ರಾಣತ್ಯಾಗ ಮಾಡಿದ್ದಾರೆ.