ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ

ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ...
ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ
ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ
Updated on
ಬೆಂಗಳೂರು: ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. 
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಟ್ಟ ಪ್ರದೇಶದ 56 ಕಿಮೀ ರೈಲು ಮಾರ್ಗದಲ್ಲಿ 68 ಕಡೆ ರೈಲು ಹಳಿಗಳ ಮೇಲೆ ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. 
ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್'ಪ್ರೆಸ್ ಸಂಚಾರ ಸೆ.2-4 ಮತ್ತು 9-11ರವರೆಗೂ ರದ್ದುಗೊಂಡಿದೆ. 
ಕೆಎಸ್ಆರ್ ಬೆಂಗಳೂರಿಗೆ ತೆರಳುವ ಇದೇ ರೈಲು ಸೆ.1 ಮತ್ತು 5ರಿಂದ 8, 12 ಮತ್ತು 14ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರಕ್ಕೆ ತೆರಳುವ ರೈಲುಗಳು ಸೆ.2-5 ಮತ್ತು 9-15ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರ ಕ್ಕೆ ಸಂಚಾರ ನಡೆಸುವ ರೈಲು ಸೆ.6-8 ಮತ್ತು 13-15ರವರೆಗೂ ರದ್ದುಗೊಂಡಿದೆ. ಹಾಸನದಿಂದ ಮಂಗಳೂರಿಗೆ ತೆರಳುವ ರೈಲುಗಳು ಸೆ.2, 4, 6, 9, 11 ಮತ್ತು 13ರವರೆಗೂ ರದ್ದುಗೊಂಡಿದೆ. 
ಸೆ.3,5,7,10,12 ಮತ್ತು 14 ರಂದು ಯಶವಂತಪುರದಿಂದ ಮಂಗಳೂರಿಗೆ ತೆರಳುವ ರೈಲುಗಳು ರದ್ದುಗೊಂಡಿದೆ. ಸೆ.4,6,8,11,13 ಮತ್ತು 15 ರಂದು ಯಶವಂತಪುರದಿಂದ ಕಾರವಾರ-ಹಾಸನಕ್ಕೆ ತೆರಳುವ ರೈಲುಗಳು ರದ್ದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಜನ ಸಾಧಾರಣ್ ರೈಲುಗಳು ಯಶವಂತಪುರದಿಂದ -ಹಾಸನ ಜನ ಸಾಧಾರಣ್ ರೈಲು ರೈಲು ಸಂಖ್ಯೆ  06515 ಸೆ.8 ಮತ್ತು 15 ರಂದು ಕಾರ್ಯನಿರ್ವಹಿಸಲಿವೆ. 06576 ಹಾಸನ - ಯಶವಂತುಪ ಜನ ಸಾಧಾರಣ್ ವಿಶೇಷ ರೈಲು ಸೆ.2 ಮತ್ತು 9 ರಂದು ಹಾಸನದಿಂದ ಯಶವಂತಪುರಕ್ಕೆ ಮರಳಿ ಬರಲಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com