ಹುಬ್ಬಳ್ಳಿ: ರಾಜ್ಯದ ಕಲಘಟಗಿ ತಾಲೂಕಿನ ಬೂದನಗುಡ್ಡ ಗ್ರಾಮದ್ದು ಎನ್ನಲಾದ ಕುದುರೆ ಗಾಡಿ ಓಟದ ಸ್ಪರ್ಧೆಯಲ್ಲಿ ಸವಾರನೊಬ್ಬ ಗಾಡಿಯಿಂದ ಕೆಳಗೆ ಬಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಕುದರೆಗಾಡಿ ಓಟದ ಸ್ಪರ್ಧೆ ಬಸವಣ್ಣ ದೇವರ ಜಾತ್ರೆ ವೇಳೆ ನಡೆದಿದೆ ಎನ್ನಲಾಗಿದೆ. ಕೊನೆ ಶ್ರಾವಣ ಸೋಮವಾರದ ಪ್ರಯುಕ್ತ ನಿನ್ನೆ ಬೂದನಗುಡ್ಡದಲ್ಲಿ ಜಾತ್ರಾ ಮಹೋತ್ಸವದ ವೇಳೆ ಬೈಕ್ ಮತ್ತು ಜಟಕಾ ಬಂಡಿ ಸ್ಪರ್ಧೆಯನ್ನು ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಕುದುರೆ ಗಾಡಿಯಿಂದ ಬಿದ್ದ ಸವಾರ ಸ್ಧಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಘಟನೆ ನಡೆದಿದ್ದೇಲಿ ಎಂಬ ಕುರಿತು ಚರ್ಚೆ ಶುರುವಾಗಿದೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿಜಯ್ ಎಂಬುವರು ಈ ವಿಡಿಯೋ ಇಲ್ಲಿಯದಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಬೇರೆ ಎಲ್ಲೋ ನಡೆದ ಘಟನೆಯನ್ನು ಕಲಘಟಗಿ ತಾಲೂಕಿನಲ್ಲಿ ನಡೆದಿದೆ ಎಂದು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದು ಸದ್ಯಕ್ಕೆ ಈ ಭೀಕರ ವಿಡಿಯೋ ವೈರಲ್ ಆಗಿದೆ.