ಒಂದು ಅಂದಾಜಿನ ಪ್ರಕಾರ ಜಲಪ್ರವಾಹದಿಂದ ರಾಜ್ಯದ ಮೂರು ಜಿಲ್ಲೆಗಳಿಂದ ಸುಮಾರು 700 ಕೋಟಿ ನಷ್ಟ ಉಂಟಾಗಲಿದ್ದು, ನಾಶವಾಗಿರುವ ಕಾಫಿ ಪ್ಲಾಂಟೇಷನ್ ನ್ನು ಸರಿ ದಾರಿಗೆ ತರುವುದಕ್ಕೆ ಕಾಫಿ ಬೆಳೆಗಾರರಿಗೆ ಆರ್ಥಿಕ ಹೊರೆಯೂ ಉಂಟಾಗಲಿದೆ. ಕಾಫಿ ಬೋರ್ಡ್ ನ ಪ್ರಕಾರ, ಭೂಕುಸಿತದಿಂದಾಗಿ 1,000 ಹೆಕ್ಟೇರ್ ಕಾಫಿ ತೋಟ ನಾಶವಾಗಿದೆ ಎಂದು ರಮೇಶ್ ರಾಜಾ ಮಾಹಿತಿ ನೀಡಿದ್ದಾರೆ.