ನಾಡಪ್ರಭು ಕೆಂಪೇಗೌಡ ಬಡಾವಣೆ :ಮಂಗಳವಾರ ಐದು ಸಾವಿರ ನಿವೇಶನಗಳ ಹಂಚಿಕೆ !

ಬಿಡಿಎ ಅಭಿವೃದ್ದಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಯನ್ನು ಮಂಗಳವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆರಂಭಿಸಲಿದ್ದಾರೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಡಿಎ ಅಭಿವೃದ್ದಿಪಡಿಸಿರುವ  ನಾಡಪ್ರಭು ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಯನ್ನು ಮಂಗಳವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್  ಆರಂಭಿಸಲಿದ್ದಾರೆ.

ಇದು ಎರಡನೇ ಹಂತದ ಹಂಚಿಕೆಯಾಗಿದ್ದು, ಗಣಕೀಕೃತ ಯಾದೃಚ್ಚೀಕರಣ ಮಾದರಿಯನ್ನು  ಸೈಟ್ ಹಂಚಿಕೆಯಲ್ಲಿ ಅನುಸರಿಸಲಾಗುತ್ತದೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇದೇ 25 ರಂದು ಮಂಗಳವಾರ  ಮುಖ್ಯಮಂತ್ರಿಗ ಗೃಹ ಕಚೇರಿ ಕೃಷ್ಣಾದಲ್ಲಿ  ನಿವೇಶನಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ನಂತರ ನಿವೇಶನ ಪಡೆದ ಪಲಾನುಭವಿಗಳ ಹೆಸರನ್ನು ಬಿಡಿಎ ಅಧಿಕೃತ ಜಾಲತಾಣ bdabangalore.org ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com