ನಿನ್ನೆ ಪ್ರಚಾರದ ವೇಳೆ ಕಂಡುಬಂದ ರಿಜ್ವಾನಾ ಅರ್ಷದ್
ನಿನ್ನೆ ಪ್ರಚಾರದ ವೇಳೆ ಕಂಡುಬಂದ ರಿಜ್ವಾನಾ ಅರ್ಷದ್

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗ ವ್ಯಾಪಾರಿಗಳ ಮೇಲೆ ಐಟಿ ದಾಳಿ

ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಐಟಿ ...
ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರಿಗೆ ಸೇರಿದ ಡಿಕನ್ಸನ್ ರಸ್ತೆಯಲ್ಲಿರುವ ಕಾಂಗ್ರೆಸ್​ ಪ್ರಚಾರ ಕಚೇರಿಯ ಜೊತೆಗೆ ರಿಜ್ವಾನ್​ ಆಪ್ತರಾಗಿರುವ ಮೂವರು ಉದ್ಯಮಿಗಳಾದ ಅಮಾನುಲ್ಲಾ ಖಾನ್​, ಖಮಲ್ ಪಾಷಾ ಹಾಗೂ ನಯೀಜ್ ಖಾನ್​ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ಪ್ಯಾಲೇಸ್​ ಡೆಕೋರೇಷನ್​ ಉದ್ಯಮ ನಡೆಸುತ್ತಿರುವ ಅಮಾನುಲ್ಲಾ ಖಾನ್​, ಗೋಲ್ಡನ್ ಆರ್ಚರಿ ಉದ್ಯಮಿ ಕಮಲ್ ಪಾಷಾ ಹಾಗೂ ರಿಯಲ್​ ಎಸ್ಟೇಟ್​ ಉದ್ಯಮಿ ನಯೀಜ್ ಖಾನ್​ ರಿಜ್ವಾನ್​ ಅರ್ಷದ್​​​ಗೆ ಆಪ್ತರಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ಅಭ್ಯರ್ಥಿ ರಿಜ್ವಾನ್ ಅರ್ಶದ್, ರಾಜಕೀಯ ಪ್ರೇರಿತ ದಾಳಿ  ಎಂದು ಪ್ರತಿಕ್ರಿಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com