ಮಂಗಳೂರು: ಆಟೋಗೆ ಲಾರಿ ಢಿಕ್ಕಿ, ಶಿಕ್ಷಕಿ ದುರ್ಮರಣ

ಆಟೋರಿಕ್ಷಾಗೆ ಲಾರ್ತಿ ಢಿಕ್ಕಿಯಾಗಿ ಶಿಕ್ಷಕಿಯೊಬ್ಬರು ದಾರುಣ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳುರಿನಲ್ಲಿ ನಡೆದಿದೆ. 
ಮಂಗಳೂರು: ಆಟೋಗೆ ಲಾರಿ ಢಿಕ್ಕಿ, ಶಿಕ್ಷಕಿ ದುರ್ಮರಣ
ಮಂಗಳೂರು: ಆಟೋಗೆ ಲಾರಿ ಢಿಕ್ಕಿ, ಶಿಕ್ಷಕಿ ದುರ್ಮರಣ

ಮಂಗಳೂರು: ಆಟೋರಿಕ್ಷಾಗೆ ಲಾರ್ತಿ ಢಿಕ್ಕಿಯಾಗಿ ಶಿಕ್ಷಕಿಯೊಬ್ಬರು ದಾರುಣ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳುರಿನಲ್ಲಿ ನಡೆದಿದೆ. 

ಮಂಗಳೂರು ಕೊಟ್ಟಾರ ಸಮೀಪ ನಡೆದ ದುರ್ಘಟನೆಯಲ್ಲಿ ಪಣಂಬೂರಿನ ಶಾಲಾ ಶಿಕ್ಷಕಿ ಶೈಲಜಾ ರಾವ್ (51) ಸಾವಿಗೀಡಾಗಿದ್ದಾರೆ. ಬಿಜೈ ನಿವಾಸಿಯಾಗಿದ್ದ ಶೈಲಜಾ ಆಟೋದಲ್ಲಿ ಕದ್ರಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com