ಗುಂಡ್ಲುಪೇಟೆ: ಬೈಕ್​ ಬಸ್​ ಮಧ್ಯೆ ಅಪಘಾತ, ನವವಿವಾಹಿತೆ ಸೇರಿ ಇಬ್ಬರ ದುರ್ಮರಣ

ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಗುಂಡ್ಲುಪೇಟೆ: ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.

ಬೆಂಡಗಳ್ಳಿ ಗ್ರಾಮದ ನವವಿವಾಹಿತೆ ಕಾವ್ಯ(20) ಹಾಗೂ ಕಾವ್ಯಳ ಸಂಬಂಧಿ ಮಹೇಶ್​(30) ಮೃತಪಟ್ಟವರು, 

ಘಟನೆಯಲ್ಲಿ ಮೃತಳ ಪತಿ ರಾಜ್​ಕುಮಾರ್(28) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ

.ಬೆಂಡಗಳ್ಳಿಯಿಂದ ಬೀಗರ ಔತಣ ಕೂಟ ಮುಗಿಸಿ ಗುಂಡ್ಲುಪೇಟೆಗೆ ತ್ರಿಬಲ್ ರೈಡಿಂಗ್​​ನಲ್ಲಿ ಬರುತ್ತಿದ್ದಾಗ ಬೈಕ್​ಗೆ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ

.ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ :- ಗೂಳಿಪುರ ನಂದೀಶ
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com