ಸಾರ್ವಜನಿಕರೇ ಹುಷಾರ್ : ಮಾಲ್, ಶಾಪ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ- ಭಾಸ್ಕರ್ ರಾವ್ ಟ್ವೀಟ್ 

ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್  ಟ್ವೀಟ್ ಮಾಡಿದ್ದಾರೆ. 
ಭಾಸ್ಕರ್ ರಾವ್
ಭಾಸ್ಕರ್ ರಾವ್
Updated on

ಬೆಂಗಳೂರು : ಟ್ವಿಟ್ಟರ್​ನಲ್ಲಿ  ಸದಾ ಕ್ರಿಯಾಶೀಲವಾಗಿರುವ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರು  ಜನಸ್ನೇಹಿ ಟ್ವೀಟ್​‌ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ಎತ್ತಿದ  ಕೈ. ಈಗ ಆಯುಕ್ತರು, ಸೈಬರ್​ ಕ್ರೈಮ್​ ತಡೆಗಟ್ಟಲು ಜನರು ಏನು ಮಾಡಬೇಕು ಎಂಬುದರ ಕುರಿತು ಸರಳ ಸಂದೇಶವನ್ನು ಹಂಚಿಕೊಂಡಿದ್ದಾರೆ‌. 

ಈ  ಬಗ್ಗೆ ಟ್ವೀಟ್​ ಮಾಡಿರುವ ಭಾಸ್ಕರ್ ರಾವ್ , ಸೈಬರ್​​ ಕ್ರೈಂ ತಡೆಯಲು ಮೊದಲ ಹೆಜ್ಜೆ ,  ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ಸಲಹೆ ನೀಡಿದ್ದಾರೆ.

ಮೊಬೈಲ್ ನಂಬರ್ ಶೇರ್ ಮಾಡುವುದರಿಂದ  ನಿಮ್ಮ ನಂಬರ್​ ಡೇಟಾ ಆಗಿ ಮಾರಾಟವಾಗುತ್ತದೆ. ಹೀಗಾಗಿ ಸೈಬರ್​​ ವಂಚನೆಗೆ ನೀವೇ ಬಾಗಿಲು  ತೆರೆದಂತೆ ಆಗುತ್ತದೆ. ಆದ್ದರಿಂದ ಮೊಬೈಲ್ ಫೋನ್​ ನಂಬರ್​ ಅನ್ನು ಶೇರ್​  ಮಾಡಬೇಡಿ ಕೊಳ್ಳಬೇಡಿ ಎಂದು ಬರೆದುಕೊಳ್ಳವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com