ಬಾಲ ಸಾಹಿತ್ಯ ಪ್ರಶಸ್ತಿ ವಿಜೇತ ಚಂದ್ರಕಾಂತ ಕರದಳ್ಳಿ ವಿಧಿವಶ

ಮಕ್ಕಳ ಸಾಹಿತಿ ಖ್ಯಾತಿಯ ಚಂದ್ರಕಾಂತ ಕರದಳ್ಳಿ ಅವರು ವಿಧಿವಶರಾಗಿದ್ದಾರೆ.
ಚಂದ್ರಕಾಂತ ಕರದಳ್ಳಿ
ಚಂದ್ರಕಾಂತ ಕರದಳ್ಳಿ

ಬೆಂಗಳೂರು: ಮಕ್ಕಳ ಸಾಹಿತಿ ಖ್ಯಾತಿಯ ಚಂದ್ರಕಾಂತ ಕರದಳ್ಳಿ ಅವರು ವಿಧಿವಶರಾಗಿದ್ದಾರೆ. 

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರಿಗೆ 67 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಬಳಿಕ ಚಂದ್ರಕಾಂತ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. 

ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಚಂದ್ರಕಾಂತ ಅವರ ಕಾಡ ಕನಸಿನ ಬೀಡಿಗೆ ಎಂಬ ಕಾದಂಬರಿ 2019ರ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿ ಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com