ಸಾಮೂಹಿಕ ವಿವಾಹ ಯೋಜನೆ: ಯಶ್, ರಾಧಿಕಾ ರಾಯಭಾರಿ

ಮುಜರಾಯಿ ದೇಗುಲಹಗಳಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿಗಳು ರಾಯಭಾರಿಗಳಾಗಲಿದ್ದಾರೆಂದು ತಿಳಿದುಬಂದಿದೆ. 
ಯಶ್, ರಾಧಿಕಾ
ಯಶ್, ರಾಧಿಕಾ
Updated on

ಬೆಂಗಳೂರು: ಮುಜರಾಯಿ ದೇಗುಲಹಗಳಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿಗಳು ರಾಯಭಾರಿಗಳಾಗಲಿದ್ದಾರೆಂದು ತಿಳಿದುಬಂದಿದೆ. 

ಮುಂದಿನ ವರ್ಷ ಏಪ್ರಿಲ್ 26 ಮತ್ತು ಮೇ 24 ರಂದು ಸರ್ಕಾರ ಸಾಮೂಹಿಕ ವಿವಾಹ ನಡೆಸಲಿದ್ದು, ಈ ವೇಳೆ 1,000 ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. 

ವಧುವಿಗೆ ಸರ್ಕಾರ 8 ಗ್ರಾಂ ಚಿನ್ನದ ಮಾಂಗಲ್ಯ ಚೈನ್ ಹಾಗೂ ದಂಪತಿಗಳಿಗೆ ರೂ.15,000 ನಗದು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸಾಮೂಹಿಕ ವಿವಾಹ ನಡೆಸಲು ಮುಜರಾಯಿ ಇಲಾಕೆ ಕ್ಲಾಸ್ ಎ ಇರುವ 100 ದೇವಾಲಯಗಳನ್ನು ಆಯ್ಕೆ ಮಾಡಿದೆ. ಈಗಾಗಲೇ ಯೋಜನಗೆ ಸಾಕಷ್ಟು ಸಿದ್ಧತೆಗಳನ್ನು  ನಡೆಸಲಾಗಿದ್ದು, ಯೋಜನೆಗೆ ಯಶ್ ಹಾಗೂ ರಾಧಿಕಾ ಅವರನ್ನು ರಾಯಭಾರಿಗಳನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕೆ ದಂಪತಿಗಳೂ ಕೂಡ ಒಪ್ಪಿಗೆ ನೀಡಿದ್ದೇನೆಂದು ಹೇಳಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ರಾಯಭಾರಿಗಳಾಗಿ ಯಶ್ ಹಾಗೂ ರಾಧಿಕಾ ಅಷ್ಟೇ ಅಲ್ಲದೆ, ಸುಧಾಮೂರ್ತಿ, ಪುನೀತ್ ರಾಜ್ ಕುಮಾರ್ ಅವರನ್ನು ರಾಯಭಾರಿಗಳಾಗಿ ಮಾಡಲು ಚಿಂತನೆ ನಡೆಸಿದ್ದು, ಈ ಬಗ್ಗೆ ಪತ್ರ ಕೂಡ ಬರೆಯಲಾಗಿದೆ. ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಪತ್ರ ಬರೆಯಲಾಗಿದ್ದು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com