"ನಾನು ನನ್ನ ತಾಯಿಯ ಮನೆಗೆ ಹಿಂತಿರುಗಿದ ವಿಚಾರ ತಿಳಿದ ವಿನೋದ್ ನನಗೆ ಮತ್ತೆ ಕಿರುಕುಳ ನೀಡಿದ್ದಲ್ಲದೆ ಅವನ ವಿರುದ್ಧ ನಾನು ದಾಖಲಿಸಿದ ದೂರುಗಳನ್ನು ಹಿಂಪಡೆಯಲು ಒತ್ತಾಯಿಸಿದ್ದನು. ನಾನು ನನ್ನ ಪತಿಯೊಡನೆ ಜನವರಿ 21 ರಂದು ಟ್ರಿನಿಟಿಚರ್ಚ್ ಗೆ ತೆರಳಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗುವಂತೆ ಆತ ಆಗ್ರಹಿಸಿದ. ಅಂತೆಯೇ ನಾನು ನನ್ನ ಪತಿಯೊಡನೆ ಚರ್ಚ್ ಗೆ ತೆರಳಿದಾಗ ಅಲ್ಲಿ ನಾನು ಆರ್ಚ್ ಬಿಷಪ್ ಅವರನ್ನು ಕಂಡೆ,. ನಾನು ಅವರನ್ನು ಅವರ ನಿವಾಸದಲ್ಲಿ ಏಕಾಂತವಾಗಿ ಭೇಟಿ ಮಾಡಿದ್ದ ವೇಳೆ ಆರ್ಚ್ ಬಿಷಪ್ ಸಹ ವಿನೋದ್ ವಿರುದ್ಧ ದೂರು ಹಿಂಪಡೆಯಬೇಕೆಂದು ನನ್ನನ್ನು ಒತ್ತಾಯಿಸಿದರು. ಇದಕ್ಕಾಗಿ ನನಗೆ ಅವರು ನಡೆಸುತ್ತಿದ್ದ ಇನ್ಸ್ ಟಿಟ್ಯೂಟ್ ನಲ್ಲಿ ಒಂದು ಉದ್ಯೋಗ, ಹಣವನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾರೆ.