ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!

ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!
ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!
Updated on
ಬೆಂಗಳೂರು: ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದ ಕೃತ್ಯದಲ್ಲಿ ನಾರಾಯಣರೆಡ್ಡಿ (60) ಮತ್ತು ಇವರ ಪುತ್ರ ಲಿಂಗಾರೆಡ್ಡಿ (33) ಹತ್ಯೆಯಾಗಿದ್ದಾರೆ. ಮುತ್ತುಕದಹಳ್ಳಿಯ ಬಾಬು (35) ಎಂಬಾತನೇ ಆರೋಪಿಯಾಗಿದ್ದು ಹತ್ಯೆ ನಡೆಸಿದ ಬಳಿಕ ಆರೋಪಿ ತಾನೇ ಪೋಲೀಸರಿಗೆ ಶರಣಾಗಿದ್ದಾನೆ.

ಘಟನೆ ವಿವರ

ಮುತ್ತಕದಹಳ್ಳಿಯಲ್ಲಿ ನಾರಾಯಣರೆಡ್ಡಿ ತಮ್ಮ ಜಮೀನನ್ನು ಆರೋಪಿ ಬಾಬುವಿಗೆ ನೀಡಿದ್ದರು. ಆದರೆ ಜಮೀನು ನೀಡುವ ಕುರಿತು ಮಾತಿನ ಒಡಂಬಡಿಕೆ ವಿನಾ ನೊಂದಣಿ ಆಗಿರಲಿಲ್ಲ. ಈ ವಿಚಾರ ಅವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹಲವು ವೇಳೆ ಮಧ್ಯಸ್ಥದಾರರ ಸಂಧಾನದಿಂದ ಜಗಳ ಪರಿಹಾರ ಕಂಡಿತ್ತು.
ಆದರೆ ಸೋಮವಾರ ನಾರಾಯಣರೆಡ್ಡಿ ಹಾಗೂ ಅವರ ಪುತ್ರ ಲಿಂಗಾರೆಡ್ಡಿ ನೀಲಗಿರಿ ತೋಪಿನ ಬಳಿ ಕೆಲಸ ಮಾಡುತ್ತಿದ್ದಾಗ ಬಾಬು ಅಲ್ಲಿಗೆ ಆಗಮಿಸಿ ಮತ್ತೆ ವಾಗ್ವಾದಕ್ಕಿಳಿದಿದ್ದಾನೆ. ಆವೇಳೆ ಮಾತು ವಿಕೋಪಕ್ಕೆ ಹೋಗಿ ಎರಡೂ ಕಡೆಯವರು ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಚ್ಚು ಹಿಡಿದೇ ಆಗಮಿಸಿದ್ದ ಆರೋಪಿ ಬಾಬು ಮೊದಲು ನಾರಾಯಣರೆಡ್ಡಿ ಆ ನಂತರ ಲಿಂಗಾರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದಾನೆ.

ಆರೋಪಿ ಕೊಲೆ ಬಳಿಕ ತಾನೇ ನೇರವಾಗಿ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ವಿವರ ಪಡೆದ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com