"ರಮೇಶ್ ಆಟೋ ಚಾಲಕನಾಗಿದ್ದು ಘಟನೆ ನಡೆದ ವೇಳೆ ಯಶೋಧಾ ಅವರ ನೆರವಿಗೆ ಧಾವಿಸಿದ್ದರು.ಯಶೋಧಾ , ರಮೇಶ್ ಕುಟುಂಬಕ್ಕೆ ಬಹಳ ಹತ್ತಿರದವರಾಗಿದ್ದು ರಮೇಶ್ ಆಟೋ ರಿಕ್ಷಾವನ್ನು ಖರೀದಿಸಲು ಸಹಾಯ ಮಾಡಿದ್ದರು. ಕೇಬಲ್ ಆಪರೇಟರ್ ಮಣಿಕಂಠ ಹಾಗೂ ರಮೇಶ್ ಆಂಟೆನಾ ಸರಿಮಾಡುವ ವೇಳೆ ಯಶೋಧಾ ಬಲ್ಕನಿಯಲ್ಲೇ ಇದ್ದರು. ಅದಾಗ ವಿದ್ಯುತ್ ಸ್ಪರ್ಶವಾಗಿ ರಮೇಶ್ ಗಾಯಗೊಂಡಿದ್ದರು.