ಗುಂಡಿನ ಮತ್ತೇ ಗಮ್ಮತ್ತು: ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು!

ಪ್ರಪಂಚದ ಅರಿವೇ ಇಲ್ಲದೆ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದವರ ನಶೆಯನ್ನು ಕ್ಷಣ ಮಾತ್ರದಲ್ಲಿ ನಾಗರಾಜ ಇಳಿಸಿದ್ದಾನೆ....
ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು
ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು
Updated on
ಶಿವಮೊಗ್ಗ: ಪ್ರಪಂಚದ ಅರಿವೇ ಇಲ್ಲದೆ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದವರ ನಶೆಯನ್ನು ಕ್ಷಣ ಮಾತ್ರದಲ್ಲಿ ಅಲ್ಲಿಗೆ ಬಂದ 'ನಾಗ'ರಾಜ ಇಳಿಸಿದ್ದಾನೆ.
ಹೌದು, ಶಿವಮೊಗ್ಗದ ತೀರ್ಥಹಳ್ಳಿಯ ಕಮ್ಮಾರ್ಡಿ ಗ್ರಾಮದ ವೈನ್ ಶಾಪ್ ನಲ್ಲಿ ಹಾವು ಕಾಣಿಸಿಕೊಂಡು ಅಲ್ಲಿದ್ದವರಿಗೆಲ್ಲಾ ಗಾಬರಿ ಹುಟ್ಟಿಸಿತ್ತು, ಬಾರ್ ನಲ್ಲಿ ಮಧ್ಯದ ಬಾಟಲ್ ಗಳ ನಡುವೆ ಹಾವು ಸೇರಿಕೊಂಡಿತ್ತು. ಇದನ್ನು ನೋಡಿದ ಅಲ್ಲಿನ ಕೆಲಸಗಾರರು, ಮಾಲೀಕರು ಮತ್ತು ಗ್ರಾಹಕರು ಅಲ್ಲಿಂದ ಹೊರ ಓಡಿದ್ದಾರೆ.
ಕೂಡಲೇ ಹಾವು ಹಿಡಿಯುವವರನ್ನು ಕರೆಸಿ, ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಿಸಿದ್ದಾರೆ.ನಾವು ಸ್ಥಳ ತಲುಪಿದಾಗ ಅಲ್ಲಿದ್ದ ಜನ ಕುತೂಹಲದಿಂದ ಕಾಯುತ್ತಿದ್ದರು, ನಾವು ಹಾವನ್ನು ಹಿಡಿದ ನಂತರ ಮತ್ತೆ ಮದ್ಯ ಸೇವನೆ ಮುಂದುವರಿಸಿದರು ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಉರಗ ತಜ್ಞ ಅಜಯ್ ಗಿರಿ ಹೇಳಿದ್ದಾರೆ.
ಫೆಬ್ರವರಿ 11 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಹಾವಿನ ತಲೆ ಬಿಯರ್ ಕ್ಯಾನ್ ಒಳಗಡೆ ಸಿಕ್ಕಿಕೊಂಡಿತ್ತು, ತೀರ್ಥಹಳ್ಳಿಯ ಕಲ್ಮನೆಯಲ್ಲಿ ಈ ಘಟನೆ ನಡೆದಿದ್ದು,  ನಂತರ ಬಿಯರ್ ಕ್ಯಾನ್ ನಿಂದ ಹಾವಿನ ತಲೆ ಹೊರ ತೆಗೆಯಲಾಯಿತು ಎಂದು ಹೇಳಿದ್ದಾರೆ.
ಕಲ್ಮನೆ ಸೇತುವೆ ಬಳಿ ಹಾವಿನ ತಲೆ ಬಿಯರ್ ಕ್ಯಾನ್ ಒಳಗೆ ಸೇರಿಕೊಂಡಿತ್ತು, ಅಲ್ಲಿನ ನಿವಾಸಿಗಳು ನಮಗೆ ಮಾಹಿತಿ ನೀಡಿದರು, ಕೂಡಲೇ ಆಗಮಿಸಿ ಬಿಯರ್ ಕ್ಯಾನ್ ತಳ ಕತ್ತರಿಸಿ ಹಾವು ಸುರಕ್ಷಿತವಾಗಿ ಹೊರಗೆ ಬರುವಂತೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com