"ನಾನು ಹಾಗೂ ನನ್ನ ಮಗಳು ಮನೆಯಲ್ಲಿ ಸುಟ್ಟ ವಾಸನೆಯನ್ನು ಗುರುತಿಸಿ ಮನೆಯಿಂದ ಹೊರನಡೆಯಲು ಮುಂದಾದೆವು, ಆಗ ಮನೆಯ ಮುಖ್ಯದ್ವಾರದಲ್ಲಿ ಬೆಂಕಿ ಹತ್ತಿಕೊಂಡಿರುವುದು ಕಂಡಿತ್ತು. ನನಗೆ ಯೋಗೀಶ್ ಮೇಲೆ ಅನುಮಾನವಿದೆ. ಆತ ನನ್ನ ಮಗಳಿಗೆ ಸದಾ ಕಿರುಕುಳ ನೀಡುತ್ತಿದ್ದ" ಶಾರದಾ ಹೇಳಿದ್ದಾರೆ. ಶಾರದಾ ಹಾಗೂ ಆಕೆಯ ಪುತ್ರಿ ಜೋರಾಗಿ ಕ್ರುಚಿದಾಗ ನೆರೆಯವರು ಧಾವಿಸಿ ಬಂದು ಹೆಚ್ಚಿನ ಅನಾಹುತವಾಗುವುದರೊಳಗೆ ಬೆಂಕಿಯ್ತನ್ನು ನಂದಿಸಿದ್ದಾರೆ.