ಶಿವಕುಮಾರ ಸ್ವಾಮಿಗಳ ಅನಾರೋಗ್ಯದ ಕುರಿತು ಭಕ್ತರಲ್ಲಿ ಆತಂಕ ಮನೆ ಮಾಡಿದ್ದು, ತುಮಕೂರಿನ ಮಠದತ್ತ ಭಕ್ತಸಾಗರ ಧಾವಿಸುತ್ತಿರುವಂತೆಯೇ ಇತ್ತ ಮಠದ ಅವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಪರಮೇಶ್ ಅವರು, ಅನಾರೋಗ್ಯಕ್ಕೀಡಾಗಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.