ಮೈಸೂರು: ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ, ಅಪರಿಚಿತರಿಂದ ಕೊಲೆ ಶಂಕೆ

ಅರ್ಧ ಸುಟ್ಟಂತಹಾ ಸ್ಥಿತಿಯಲ್ಲಿರಿವ ಮಹಿಳೆಯ ಮೃತದೇಹವೊಂದು ಮೈಸೂರು ಚಾಮುಂಡಿ ಬೆಟ್ಟದ ಸಮೀಪ ಮೀಸಲು ಅರಣ್ಯದಲ್ಲಿ ಪತ್ತೆಯಾಗಿದ್ದು ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೈಸೂರು: ಅರ್ಧ ಸುಟ್ಟಂತಹಾ ಸ್ಥಿತಿಯಲ್ಲಿರಿವ ಮಹಿಳೆಯ ಮೃತದೇಹವೊಂದು ಮೈಸೂರು ಚಾಮುಂಡಿ ಬೆಟ್ಟದ ಸಮೀಪ ಮೀಸಲು ಅರಣ್ಯದಲ್ಲಿ ಪತ್ತೆಯಾಗಿದ್ದು ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ಮದ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.ಆದರೆ ಒಂದು ವಾರದ ಹಿಂದೆ ಈಕೆ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ಉತ್ತನಹಳ್ಳಿ-ಚಾಮುಂಡಿ ಬೆಟ್ಟ್ ರಸ್ತೆಯ ಜ್ವಾಲಾಮುಖಿ ವಾಚ್ ಟವರ್, ಮಹದೇಶ್ವರ ದೇವಾಲಯ ಸಮೀಪ ಮೃತದೇಹ ಪತ್ತೆಯಾಗಿದೆ. ಗುರುವಾರ ಮದ್ಯಾಹ್ನ  ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಜಗದೀಶ್ ಮತ್ತು ವಿರೂಪಾಕ್ಷ ಈ ದೇಹವನ್ನು ಪತ್ತೆ ಮಾಡಿದ್ದಾರೆ. ಮಹಿಳೆಯು 32ರಿಂದ 35ರ ನಡುವಿನ ವಯಸ್ಸಿನವಳೆಂದು ತನಿಖೆ ಕೈಗೊಂಡಿರುವ ಕೆ.ಆರ್. ಪೋಲೀಸರು ತಿಳಿಸಿದ್ದಾರೆ.
ತಲೆ ಭಾಗದಲಿ ಕಲ್ಲಿನ ಚೂರುಗಳು ಸಿಕ್ಕ ಕಾರಣ ಮಹಿಳೆಯ ತಲೆಯನ್ನು ಬಂಡೆಯೊಂದಕ್ಕೆ ಗುದ್ದಿ ಸಾಯಿಸಲಾಗಿದೆ ಎಂದು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಾಗಿ ಮಹಿಳೆಯ್ ಕಾಲುಗಳಲ್ಲಿರುವ ಎರಡು ಬೆಳ್ಳಿ ಕಾಲುಂಗುರಗಳು ಹಾಗೂ ಇತರೆ ಲೋಹದ ಆಭರಣಗಳ ಹೊರತು ಬೇರಾವ ಸಾಕ್ಷ್ಯಾಧಾರಗಳಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com