ಈಗ, ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ (ಸಿಡಬ್ಲ್ಯೂಎಂಎ) ಮುಂದೆ ಈ ಡಿಪಿಆರ್ ಸಲ್ಲಿಕೆಯಾಗಲಿದೆ.ಇದರ ಅನುಮೋದನೆ ದೊರೆತ ಬಳಿಕ ಕೇಂದ್ರ ಜಲಸಂಪನ್ಮೂಲ ಇಲಾಖೆ ಸಲಹಾ ಸಮಿತಿಯ ಮುಂದೆ ಇಡಲಾಗುತ್ತದೆ. ಡಿಪಿಆರ್ ಇದೀಗ ವಿಶೇಷ ನಿರ್ದೇಶಕರು, ಪರಿಶೀಲಿಸಲಿದ್ದಾರೆ. ಅವರು ಅನುಮತಿಸಿದ್ದಾದರೆ ಬಳಿಕ ಜಲ ಸಂಪನ್ಮೂಲ ಸಚಿವಾಲಯ ನೀರಾವರಿ ಮತ್ತು ವಿವಿಧೋದ್ದೇಶ ಯೋಜನೆಗಳ ಸಲಹಾ ಸಮಿತಿಗೆ ಪರಿಶೀಲನೆಗೆ ನೀಡಲಾಗುತ್ತದೆ.ಸಲಹಾ ಸಮಿತಿಯ ಸಭೆಯಲ್ಲಿ ಸಿಡಬ್ಲ್ಯೂಸಿ ತಯಾರಿಸಿದ ಟಿಪ್ಪಣಿ ಆಧಾರದ ಮೇಲೆ ಯೋಜನೆ ಅಂಗೀಕಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.