ಐಎಂಎ ಸಮೂಹ ಕಂಪನಿ ವಿರುದ್ಧ ನಿಯಮಬಾಹಿರ ವಹಿವಾಟಿನ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ ಸಂಬಂಧ ತನಿಖೆ ನಡೆಸುವಂತೆ ಆರ್ ಬಿ ಐ ಈ ಹಿಂದೆಯೇ ಸೂಚನೆ ನೀಡಿತ್ತು. ಅದರಂತೆ, ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿ ಎಲ್. ಸಿ. ನಾಗರಾಜ್ ಅವರಿಗೆ ವಹಿಸಿತ್ತು. ಆದರೆ, ಅವರು ಐಎಂಎ ಮಾಲೀಕರಿಂದ 4.5 ಕೋಟಿ ರೂ. ಹಣ ಪಡೆದು ಐಎಂಎ ಪರವಾಗಿ ವರದಿ ನೀಡಿದ್ದರು.