ಬಳ್ಳಾರಿ: ಹಲವು ಕಾನೂನು ತೊಡಕುಗಳ ನಂತರ, ಕಮಲಾಪುರದ ವಾಜಪೇಯಿ ಮೃಗಾಲಯ ಮತ್ತೆ ಸರಿದಾರಿಗೆ ಬಂದು ನಿಂತಿದೆ, ಜೂನ್ 21 ರಂದು ವಾಜಪೇಯಿ ಝೂ ಲೋಕಾರ್ಪಣೆಗೊಳ್ಳಲಿದೆ.
ಬಳ್ಳಾರಿ ಝೂ ನಲ್ಲಿರುವ ಪ್ರಾಣಿಗಳನ್ನು ಹೊಸ ಮೃಗಾಲಯಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ, ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ನಾವನ ಮತ್ತು ಶಿವಮೊಗ್ಗದಿಂದಲೂ ಪ್ರಾಣಿಗಳನ್ನು ಇಲ್ಲಿಗೆ ತರಲಾಗುವುದು.
ಹುಲಿ. ಸಿಂಹ, ಗಳನ್ನು ಇಲ್ಲಿ ಇರಿಸಲಾಗಿದೆ, ಜೊತೆಗೆ ಬ್ಲಾಕ್ ಬಕ್ಸ್, ಜಿಂಕೆ, ನೀಳ್ಗಾಯ್ ಗಳು ಕೂಡ ಇಲ್ಲಿವೆ ಎಂದು ವಲಯ ಅರಣ್ಯಾಧಿಕಾರಿ ಪರಮೇಶ್ ಹೇಳಿದ್ದಾರೆ,. 2 ಹುಲಿ ಮತ್ತು 2 ಸಿಂಹದ ಜೊತೆಗೆ 200 ಸಸ್ಯಹಾರಿ ಪ್ರಾಣಿಗಳಿವೆ.