ಬೆಂಗಳೂರು: 25 ಲಕ್ಷ ಋಣಮುಕ್ತ ಪತ್ರ ರವಾನೆ ಕಾರ್ಯದಲ್ಲಿ ಅಂಚೆ ಇಲಾಖೆ ಬ್ಯುಸಿ

ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.
ಅಂಚೆ ಇಲಾಖೆ ಸಿಬ್ಬಂದಿ
ಅಂಚೆ ಇಲಾಖೆ ಸಿಬ್ಬಂದಿ

ಬೆಂಗಳೂರು:ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ  ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ  ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.

ಮಾರ್ಚ್ 5 ರೊಳಗೆ ಈ ಕಾಗದ ಪತ್ರಗಳನ್ನು ಫಲಾನುಭವಿಗಳಿಗೆ ರವಾನಿಸುವಂತೆ  ಸರ್ಕಾರ ಗಡವು ವಿಧಿಸಿರುವುದರಿಂದ ಸಿಬ್ಬಂದಿಗಳು ಕಾಗದದ ಒಳಗೆ ಪತ್ರ ಸೇರಿಸಿ, ಅವುಗಳಿಗೆ ಸ್ಟಾಂಪ್ ಹಾಕಿ, ಪ್ರದೇಶವಾರು ವಿಂಗಂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲಾ ರೈತರಿಗೆ ನೀಡಲಾಗುತ್ತಿರುವ ಒಂದು ಪೇಜಿನ ಈ ಪತ್ರದಲ್ಲಿ ಅವರಿಗೆ ಈ ಯೋಜನೆ ಘೋಷಿಸಿರುವುದಾಗಿ ಮುಖ್ಯಮಂತ್ರಿ ವಿವರಿಸಿದ್ದಾರೆ. 2018 ಜುಲೈ 5 ರಂದು ಮೊದಲ ಬಜೆಟ್ ಮಂಡನೆ ವೇಳೆಯಲ್ಲಿ ಮುಖ್ಯಮಂತ್ರಿ 34 ಸಾವಿರ ಕೋಟಿ ರೂ. ಮೊತ್ತದ ಸಾಲ ಮನ್ನಾ ಘೋಷಣೆ ಮಾಡಿದ್ದರು.
ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಸೇರಿ ಇದನ್ನು 45 ಸಾವಿರ ಕೋಟಿ ರೂ. ಗೆ ಏರಿಕೆ ಮಾಡಲಾಗಿತ್ತು. ಇದರಿಂದಾಗಿ 44. 89 ಲಕ್ಷ ರೈತರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ನಿಗದಿತ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ವಲಯದ ಪೋಸ್ಟ್ ಮಾಸ್ಟರ್ ಜನರಲ್  ಸಿ.ಎ. ವರ್ಮಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com