ಮೈಸೂರು: ಕಾಚಿಗೂಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಮಂಗಳವಾರದಿಂದ ಮೈಸೂರಿಗೆ ವಿಸ್ತರಿಸಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಂಗಳವಾರ ಮೈಸೂರು-ಕೆಎಸ್ಆರ್ ಬೆಂಗಳೂರು-ಕಾಚಿಗೂಡ (ಹೈದರಾಬಾದ್) ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೈದರಾಬಾದ್ಗೆ ಪ್ರಯಾಣಿಸುವ ಸ್ಥಳೀಯ ವ್ಯಾಪಾರಿಗಳು, ಅರಮನೆ ನಗರಿ ಮತ್ತು ಹೈದರಾಬಾದ್ಗೆ ಭೇಟಿ ನೀಡುವ ಪ್ರವಾಸಿಗರ ಬಹುದಿನಗಳ ಬೇಡಿಕೆ ಈ ಸೇವೆಯಿಂದ ಈಡೇರಿದೆ ಎಂದು ಹೇಳಿದ್ದಾರೆ.
ಈ ರೈಲಿನಲ್ಲಿ ಒಟ್ಟು 24 ಬೋಗಿಗಳಿದ್ದು, ಮೊದಲ ದರ್ಜೆಯ ಒಂದು ಎಸಿ ಬೋಗಿ, ಎರಡನೇ ದರ್ಜೆಯ ಎರಡು ಎಸಿ ಬೋಗಿಗಳು, ಮೂರು ಸ್ತರದ ನಾಲ್ಕು ಎಸಿ ಬೋಗಿಗಳು, 12 ಸ್ಲೀಪರ್ ಬೋಗಿಗಳು, ಮೂರು ಸಾಮಾನ್ಯ ಬೋಗಿಗಳನ್ನು ಒಳಗೊಂಡಿರುತ್ತದೆ.
Advertisement