ಮೈಸೂರು: ರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದಜೀ ನಿಧನ

ಹಿರಿಯ ಸನ್ಯಾಸಿ ಮತ್ತು ಶ್ರೀರಾಮಕೃಷ್ಣ ಆಶ್ರಮ ಹಾಗೂ ರಾಮಕೃಷ್ಣ ವಿದ್ಯಾಶಾಲೆಯ ಮಾಜಿ ಅಧ್ಯಕ್ಷ ಸ್ವಾಮಿ ಸುರೇಶಾನಂದಜೀ ಅವರು...
ಸ್ವಾಮಿ ಸುರೇಶಾನಂದಜೀ
ಸ್ವಾಮಿ ಸುರೇಶಾನಂದಜೀ
ಮೈಸೂರು: ಹಿರಿಯ ಸನ್ಯಾಸಿ ಮತ್ತು ಶ್ರೀರಾಮಕೃಷ್ಣ ಆಶ್ರಮ ಹಾಗೂ ರಾಮಕೃಷ್ಣ ವಿದ್ಯಾಶಾಲೆಯ ಮಾಜಿ ಅಧ್ಯಕ್ಷ ಸ್ವಾಮಿ ಸುರೇಶಾನಂದಜೀ ಅವರು ಶುಕ್ರವಾರ ಮಧ್ಯರಾತ್ರಿ  ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
1960ರಲ್ಲಿ ಸನ್ಯಾಸಿಯಾಗಿ ಸೇವೆ ಆರಂಭಿಸಿದ್ದ ಸುರೇಶಾನಂದಜೀ 1972 ರಿಂದ 1989ರ ವರೆಗೆ ಆಶ್ರಮದ ಬಾತ್ಮಿದಾರರಾಗಿದ್ದರು. 1989 ರಿಂದ 1997ರವರೆಗೆ ಅಶ್ರಮದ ಮುಖ್ಯಸ್ಥರಾಗಿದ್ದರು.
ಸ್ವಾಮಿ  ಸುರೇಶಾನಂದಜೀ  ಚಂಡೀಗಢ, ಬೆಂಗಳೂರು ಹಾಗೂ ತಮಿಳುನಾಡಿನ ನಟ್ಟರಾಮಪಲ್ಲಿ ಅಶ್ರಮದ ಶಾಖೆಗಳಲ್ಲೂ ಸೇವೆ ಸಲ್ಲಿಸಿದ್ದರು. ಸುರೇಶಾನಂದ ಸ್ವಾಮೀಜಿ ಅವರ ನಿಧನಕ್ಕೆ ಜಿಲ್ಲಾ ಉಸ್ತವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತೀವ್ರ ಸಂತಾಪ ಸೂಚಿಸಿದ್ದು, ಸುರೇಶಾನಂದಜೀ ಅವರ ನಿಧನದಿಂದ ಸಮಾಜ ಓರ್ವ ಶಿಕ್ಷಣ ತಜ್ಞ, ಮಾರ್ಗದರ್ಶಿ, ತತ್ವಜ್ಞಾನಿಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com