ಸ್ವಾಮಿ ಸುರೇಶಾನಂದಜೀ ಚಂಡೀಗಢ, ಬೆಂಗಳೂರು ಹಾಗೂ ತಮಿಳುನಾಡಿನ ನಟ್ಟರಾಮಪಲ್ಲಿ ಅಶ್ರಮದ ಶಾಖೆಗಳಲ್ಲೂ ಸೇವೆ ಸಲ್ಲಿಸಿದ್ದರು. ಸುರೇಶಾನಂದ ಸ್ವಾಮೀಜಿ ಅವರ ನಿಧನಕ್ಕೆ ಜಿಲ್ಲಾ ಉಸ್ತವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತೀವ್ರ ಸಂತಾಪ ಸೂಚಿಸಿದ್ದು, ಸುರೇಶಾನಂದಜೀ ಅವರ ನಿಧನದಿಂದ ಸಮಾಜ ಓರ್ವ ಶಿಕ್ಷಣ ತಜ್ಞ, ಮಾರ್ಗದರ್ಶಿ, ತತ್ವಜ್ಞಾನಿಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.