ಕರ್ನಾಟಕದ ರಾಜಕಾರಣವೇ ನನಗೆ ಸಾಕಾಗಿ ಹೋಗಿದೆ, ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು: ಸಿದ್ದರಾಮಯ್ಯ
ಕರ್ನಾಟಕದ ರಾಜಕಾರಣವೇ ನನಗೆ ಸಾಕಾಗಿ ಹೋಗಿದೆ, ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು: ಸಿದ್ದರಾಮಯ್ಯ

ಕರ್ನಾಟಕದ ರಾಜಕಾರಣವೇ ನನಗೆ ಸಾಕಾಗಿ ಹೋಗಿದೆ, ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು: ಸಿದ್ದರಾಮಯ್ಯ

ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ಬೆಂಗಳೂರು: ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. 
ಮಾ.14 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಕರ್ನಾಟಕದ ರಾಜಕಾರಣವೇ ಸಾಕಾಗಿಹೋಗಿದೆ ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು, ರಾಷ್ಟ್ರರಾಜಕಾರಣ ಮಾಡೋದಕ್ಕೆ ಬೇರೆಯ ಜನರಿದ್ದಾರೆ, ಅವರು ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 
ಇದೇ ವೇಳೆ ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ವದಂತಿಗಳ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಎ.ಮಂಜು ಜೊತೆಗೆ ಮೊನ್ನೆಯಷ್ಟೇ ಮಾತನಾಡಿದ್ದೇನೆ. ಬಿಜೆಪಿಗೆ ಹೋಗುವುದಿಲ್ಲ, ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. 
ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಕಾಂಗ್ರೆಸ್ ಗೆ ನಷ್ಟ ಆಗುತ್ತಿದೆ ಎಂಬ ಎ.ಮಂಜು ಹೇಳಿಕೆಯ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ಎ.ಮಂಜು ಅವರ ಅಭಿಪ್ರಾಯ ವೈಯಕ್ತಿಕವಷ್ಟೇ, ಪಕ್ಷದ ಅಭಿಪ್ರಾಯವಲ್ಲ ಎಂದಿದ್ದಾರೆ. 

Related Stories

No stories found.

Advertisement

X

Advertisement

X
Kannada Prabha
www.kannadaprabha.com