ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕೆಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಚರಂಡಿ ಶುದ್ಧೀಕರಣ ಘಟಕವನ್ನು ಸ್ಥಾಪಸುವುದಾಗಿ ಘೋಷಣೆ ಮಾಡಿದ್ದರು. ವೃಷಭಾವತಿ ಕಣಿವೆಯ ಜಲಾನಯದ ಪ್ರದೇಶದಿಂದ ಪ್ರತಿದಿನಕ್ಕೆ 60 ಮಿಲಿಯನ್ ಲೀಟರ್ ನೀರನ್ನು ಶುದ್ಧೀಕರಿಸುವ ಘಟಕವಿದು. ಬೆಂಗಳೂರಿನಿಂದ 40 ಕಿ ಲೋ ಮೀಟರ್ ದೂರದಲ್ಲಿ ಬಿಡದಿಯ ಬೈರಮಂಗಲ ಕೆರೆಗೆ ಈ ಕಣಿವೆಯ ನೀರು ಸಾಗುತ್ತದೆ.