ಮಡಿಕೇರಿ: ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ವ್ಯಕ್ತಿ ನೇಣಿಗೆ ಶರಣು!

ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪ-ಚಿಕ್ಕಮ್ಮನನ್ನು ಕತ್ತಿಯಲ್ಲಿ ಕಡಿದು ಹತ್ಯೆ ಮಾಡಿದ್ದಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿ ಜಿಲ್ಲೆ ಆಲೂರು ಸಿದ್ದಾಪುರದಲ್ಲಿ ನಡೆದಿದೆ.
ಮಡಿಕೇರಿ: ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ವ್ಯಕ್ತಿ ನೇಣಿಗೆ ಶರಣು!
ಮಡಿಕೇರಿ: ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ವ್ಯಕ್ತಿ ನೇಣಿಗೆ ಶರಣು!
ಮಡಿಕೇರಿ: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪ-ಚಿಕ್ಕಮ್ಮನನ್ನು ಕತ್ತಿಯಲ್ಲಿ ಕಡಿದು ಹತ್ಯೆ ಮಾಡಿದ್ದಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಆಲೂರು ಸಿದ್ದಾಪುರದಲ್ಲಿ ನಡೆದಿದೆ.
ನಿವೃತ್ತ ಪೋಲೀಸ್ ಪೇದೆಯಾಗಿದ್ದ ಸೂರನ ಗಣೇಶ್ (65), ಹಾಗೂ ಅಅರ ಪತ್ನಿ ಮೋಹಿನಿ (55) ಕೊಲೆಯಾಗಿದ್ದು ಗಣೇಶ್ ಅವರ ಅಣ್ಣನ ಮಗ ದಿಲೀಪ್ (30) ಆತ್ಮಹತ್ಯೆಗೆ ಶರಣಾಗಿರುವ ಆರೋಪಿ ಎಂದು ಗುರುತಿಸಲಾಗಿದೆ.
ಆಸ್ತಿ ವಿಚಾರವಾಗಿ ಗಣೇಶ್ ಹಾಗೂ ದಿಲೀಪ್ ಕುಟುಂಬಗಳ ಮಧ್ಯೆ ಮೊದಲಿಂದ ಜಗಳವಿತ್ತು ಎನ್ನಲಾಗಿದ್ದು ದಂಪತಿಗಳ ಹತ್ಯೆಗೆ ಇದೇ ಕಾರಣವಾಗಿರಬಹುದು ಎಂದ್ಬ ಶಂಕೆ ವ್ಯಕ್ತವಾಗಿದೆ.
ಬುಧವಾರ ಸಂಜೆ ನಡೆದ ಗಲಾಟೆಯ ವೇಳೆ ಕೋಪಗೊಂಡ ದಿಲೀಪ್ ಗಣೇಶ್ ಕತ್ತನ್ನು ಕತ್ತಿಯಿಂದ ಕಡಿದಿದ್ದಾನೆ.ಆ ವೇಳೆ ತಡೆಯಲು ಬಂದಿದ್ದ ಗಣೇಶ್ ಪತ್ನಿ ಮೋಹಿನಿಯ ಕತ್ತನ್ನೂ ನಿರ್ದಯವಾಗಿ ಕಡಿದು ಹಾಕಿದ್ದಾನೆ. ಕಡಿದ ರಭಸಕ್ಕೆ ಇಬ್ಬರ ರುಂಡ, ಮುಂಡಗಳು ಬೇರಾಗಿದೆ ಎನ್ನಲಾಗಿದೆ.
ಇನ್ನು ತಂದೆ-ತಾಯಿಯ ಕೊಲೆ ನೋಡಿದ ಗಣೇಶ್ ಪುತ್ರ ಹರ್ಷಿತ್ ಎಂಬಾತನ ಮೇಲೆ ಸಹ ದಿಲೀಪ್ ಹಲ್ಲೆ ಮಾಡಿದ್ದಾನೆ.ಹಲ್ಲೆಗೊಳಗಾಗಿರುವ ಹರ್ಷಿತ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.
ಇನ್ನು ಕೃತ್ಯ ಎಸಗಿದ ಬಳಿಕ ದಿಲೀಪ್ ಗಣೇಶ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶನಿವಾರಸಂತೆ ಪೋಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com