ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಅಮಾನುಷ ಹಲ್ಲೆ, ರಾಜಕಾರಣಿಯೊಬ್ಬರ ಕೈವಾಡದ ಶಂಕೆ

ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 40 ವರ್ಷದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿದ್ದ ಗ್ಯಾಂಗ್ ವೊಂದು ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಯಡಿಯೂರು ಕೆರೆ ಬಳಿ ನಡೆದಿದೆ. ಈ ದಾಳಿ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೆಲಸ  ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 40 ವರ್ಷದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿದ್ದ  ಗ್ಯಾಂಗ್ ವೊಂದು ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಯಡಿಯೂರು ಕೆರೆ ಬಳಿ ನಡೆದಿದೆ. ಈ ದಾಳಿ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಬಸವನಗುಡಿಯ ನಿವಾಸಿ ರಾಘವೇಂದ್ರ ಹಲ್ಲೆಗೊಳಗಾದ ವ್ಯಕ್ತಿ. ಈತ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ತೆರಳುತ್ತಿರಬೇಕಾದರೆ  ಯಡಿಯೂರು ಕೆರೆಯ ಬಳಿ ಅಡ್ಡಗಟ್ಟಿದ್ದ ನಾಲ್ವರು ಹಾಕಿಸ್ಟಿಕ್ ನಿಂದ ಹಲ್ಲೆ ನಡೆಸಿದ್ದಾರೆ. ಅನೇಕ ಮಂದಿ ಮೊಬೈಕ್ ಸವಾರರು ಹಾಗೂ  ಸ್ಥಳೀಯರು ಇದನ್ನು ನೋಡಿದ್ದಾರೆ ಆದರೂ, ಏನು ಸಹಾಯ ಮಾಡಿಲ್ಲ.

ತಮ್ಮ ಕುಟುಂಬದ ರಾಜಕಾರಣಿಯೊಬ್ಬರೇ ನನ್ನ ಮೇಲೆ ದಾಳಿ ನಡೆಸಿದ್ದು, ಹೆಚ್ಚುವರಿ ಪೊಲೀಸ್ ಕಮೀಷನರ್  ಅಲೋಕ್ ಕುಮಾರ್ ಅವರ ಮುಂದೆ ಅವರ ಹೆಸರು ಬಹಿರಂಗಪಡಿಸುವುದಾಗಿ ರಾಘವೇಂದ್ರ ಹೇಳಿದ್ದಾರೆ.

ನಾಗರಬಾವಿಯಲ್ಲಿ ಪರ್ನಿಚೆರ್ ಶೋ ರೊಂನಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಮಾರ್ಚ್ 27 ರಂದು ರಾತ್ರಿ 8.20 ಸುಮಾರಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಮೂರು ಬೈಕ್ ನಲ್ಲಿದ್ದ ಗ್ಯಾಂಗ್ ವೊಂದು ಅವರನ್ನು ಬೆನ್ನತ್ತಿದ್ದು, ಅಮಾನುಷ ರೀತಿಯಲ್ಲಿ ದಾಳಿ ಮಾಡಿದೆ.
ದಾಳಿಯಿಂದಾಗಿ ಕಾಲು, ತಲೆ, ಹೊಟ್ಟೆ ಹಾಗೂ ಕಾಲಿಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗಿ ರಸ್ತೆಯಲ್ಲಿ ಬಿದ್ದಿದೆ. ಆದರೆ, ಸ್ಥಳೀಯರು ಹಲ್ಲೆ ಮಾಡುತ್ತಿರುವುದನ್ನು ನೋಡುತ್ತಿದ್ದರೂ ಯಾವುದೇ ಸಹಾಯಕ್ಕೆ ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com