ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 40 ವರ್ಷದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿದ್ದ ಗ್ಯಾಂಗ್ ವೊಂದು ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಯಡಿಯೂರು ಕೆರೆ ಬಳಿ ನಡೆದಿದೆ. ಈ ದಾಳಿ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಬಸವನಗುಡಿಯ ನಿವಾಸಿ ರಾಘವೇಂದ್ರ ಹಲ್ಲೆಗೊಳಗಾದ ವ್ಯಕ್ತಿ. ಈತ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ತೆರಳುತ್ತಿರಬೇಕಾದರೆ ಯಡಿಯೂರು ಕೆರೆಯ ಬಳಿ ಅಡ್ಡಗಟ್ಟಿದ್ದ ನಾಲ್ವರು ಹಾಕಿಸ್ಟಿಕ್ ನಿಂದ ಹಲ್ಲೆ ನಡೆಸಿದ್ದಾರೆ. ಅನೇಕ ಮಂದಿ ಮೊಬೈಕ್ ಸವಾರರು ಹಾಗೂ ಸ್ಥಳೀಯರು ಇದನ್ನು ನೋಡಿದ್ದಾರೆ ಆದರೂ, ಏನು ಸಹಾಯ ಮಾಡಿಲ್ಲ.
ತಮ್ಮ ಕುಟುಂಬದ ರಾಜಕಾರಣಿಯೊಬ್ಬರೇ ನನ್ನ ಮೇಲೆ ದಾಳಿ ನಡೆಸಿದ್ದು, ಹೆಚ್ಚುವರಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಅವರ ಮುಂದೆ ಅವರ ಹೆಸರು ಬಹಿರಂಗಪಡಿಸುವುದಾಗಿ ರಾಘವೇಂದ್ರ ಹೇಳಿದ್ದಾರೆ.
Advertisement