ಬಸವ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರ ಶುಭಾಶಯ

ಕ್ರಾಂತಿಯೋಗಿ ಬಸವಣ್ಣನವರ ಜನ್ಮ ದಿನಾಚರಣೆ ಅಂಗವಾಗಿ ಪ್ರದಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ....
ಜಗಜ್ಯೋತಿ ಬಸವೇಶ್ವರ( ಸಂಗ್ರಹ ಚಿತ್ರ)
ಜಗಜ್ಯೋತಿ ಬಸವೇಶ್ವರ( ಸಂಗ್ರಹ ಚಿತ್ರ)
ಬೆಂಗಳೂರು:  ಕ್ರಾಂತಿಯೋಗಿ ಬಸವಣ್ಣನವರ ಜನ್ಮ ದಿನಾಚರಣೆ ಅಂಗವಾಗಿ ಪ್ರದಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
12ನೇ ಶತಮಾನದ ಕವಿ ಬಸವಣ್ಣ ಆದರ್ಶವಾದಿ ಚಿಂತಕ, ಹಾಗೂ ಅತ್ಯದ್ಉಬತ ಸಮಾಜ ಸುಧಾರಕ, ಬಸವಣ್ಣ ಅಂದು ತಂದ ಬದಲಾವಣೆ ಇಂದಿಗೂ ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬಸವಣ್ಣ ಅವರ ಶೈಕ್ಷಣಿಕ ಕೊಡುಗೆ, ಬಡಜನರ ಮೇಲೆ ಅವರಿಗಿದ್ದ ಕಾಳಜಿ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದೆ ಎಂದು ಟ್ವೀಟ್ ನಲ್ಲಿ ಹೊಗಳಿದ್ದಾರೆ.
ಇನ್ನೂ ಸಚಿವ ಎಂಬಿ ಪಾಟೀಲ್ ಕೂಡ ಬಸವ ಜಯಂತಿಯ ಶುಭಾಶಯ ಕೋರಿದ್ದಾರೆ, ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು  ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಸಮಾಜ ಸುಧಾರಕರು, ಕ್ರಾಂತಿಯೋಗಿಗಳೂ ಆದ ಬಸವಣ್ಣನವರ ತತ್ವ, ಆದರ್ಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ತಮ್ಮ ವಚನಗಳ ಮೂಲಕ ಸಮಾಜದ ಅನಿಷ್ಟಗಳನ್ನು ತೊಲಗಿಸಿ ಮಹಾ ಕ್ರಾಂತಿ ಮಾಡಿದ ಪುಣ್ಯ ಪುರುಷರು ಎಂದು ಗಣ್ಯರು ಗುಣಗಾನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com