ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕುನೂರಿನ ಹೊರವಲಯದಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿ ಬಳಗೇರಿ ಗ್ರಾಮದ ಮಹಮದ್ರಫಿ ಕಲ್ಲೂರು(22) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಬೈಕ್ ತೆಗೆದುಕೊಂಡು ಹೊರಗಡೆ ಹೋಗಿದ್ದ ಮಹಮದ್ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಕುಕನೂರಿನ ಕೊಪ್ಪಳ ರಸ್ತೆಯ ಹೊರವಲಯದ ಹೊಲವೊಂದರಲ್ಲಿ ಇಂದು ಬೆಳಗ್ಗೆ ಶವ ಪತ್ತೆಯಾಗಿದ್ದು, ದೂರದಲ್ಲಿ ಬೈಕ್, ಪರ್ಸ್, ಮೊಬೈಲ್, ಚಪ್ಪಲಿ ಬಿದ್ದಿದ್ದು, ಇದು ಆತ್ಮಹತ್ಯೆಯೊ? ಕೊಲೆಯೊ? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement