ಮಂಗಳಮುಖಿಯರಿಗೆ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಲಿ: ಮಂಜಮ್ಮ ಜೋಗತಿ

ಸರ್ಕಾರ ಮಂಗಳಮುಖಿಯರಿಗೆ ಉದ್ಯೋಗಾವಕಾಶ ಕಲ್ಪಿಸಲಿ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಒತ್ತಾಯಿಸಿದರು.
ಮಂಗಳಮುಖಿಯರು
ಮಂಗಳಮುಖಿಯರು

ಬಾಗಲಕೋಟೆ: ಸರ್ಕಾರ ಮಂಗಳಮುಖಿಯರಿಗೆ ಉದ್ಯೋಗಾವಕಾಶ ಕಲ್ಪಿಸಲಿ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಗಮ್ಮ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ಪ್ರತಿ ತಿಂಗಳ ಕೊಡುವ 6 ನೂರು ರೂ. ಮಾಸಾಶನ ಬೇಡಾ, ಅವಕಾಶ ಕೊಡಿ. ಸರ್ಕಾರ ಕೊಡುವ  6 ನೂರು ರೂ. ನಮಗೆ ವಾರದ ಒಂದು ಮೇಕಪ್‌ಗೆ ಆಗುವುದಿಲ್ಲ ಎಂದರು.
ಮಂಗಳಮುಖಿಯರ ಮೊದಲಿನಂತೆ ಈಗಿಲ್ಲ. ನಮಗೆ ಅನುಕಂಪ ಬೇಡಾ, ಅವಕಾಶ ಕೊಡಿ ಎಂದು ಪುನರುಚ್ಚರಿಸಿದರು.

ಜೋಗಪ್ಪ ಸಾಂಸ್ಕೃತಿಕ ಹಬ್ಬಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ  ಅಕಾಡೆಮಿ ಅಧ್ಯಕ್ಷೆ ಜೋಗತಿ ಮಂಜಮ್ಮ, ರೇವತಿ, ಚಾಂದಿನಿ ಮತ್ತಿತರರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com