ಕೇಂದ್ರದ ಈ ಸ್ಪಷ್ಟೀಕರಣವನ್ನು ಪರಿಸರವಾದಿಗಳು, ವನ್ಯಜೀವಿ ಸಂರಕ್ಷಕರು ಸ್ವಾಗತಿಸಿದ್ದಾರೆ.ಕೇರಳವು ಹುಲಿ ಮೀಸಲು ಪ್ರದೇಶದಲ್ಲಿ ಎತ್ತರದ ಕಾರಿಡಾರ್ ಗಳಂತಹಾ ನಿರ್ಮಾಣ ಮಾಡುವಂತೆ ಇಟ್ಟಿರುವ ಬೇಡಿಕೆ ಅಸಮರ್ಥನೀಯ.ರಾತ್ರಿ ಸಂಚಾರ ನಿಷೇಧವನ್ನು ಹಿಂಪಡೆಯಲು ಕೇಳಿರುವುದು ಸಹ ಸರಿಯಲ್ಲ. ವಾಸ್ತವವಾಗಿ, ಒಂಬತ್ತು ಗಂಟೆಗಳ ನಿಷೇಧವನ್ನು 12 ಗಂಟೆಗಳವರೆಗೆ ಹೆಚ್ಚಿಸಬೇಕು, ಏಕೆಂದರೆ ಅದು ವನ್ಯಜೀವಿ ಉಳಿಸಿ ಚಳವಳಿಗೆ ಪೂರಕವಾಗಲಿದೆ. ಈಗಾಗಲೇ ನಿಷೇಧದಿಂದ ರಾತ್ರಿ ವೇಳೆ ಅಪಘಾತವಾಗಿ ಪ್ರಾಣಿಗಳು ಬಲಿಯಾಗುವುದು ಕಡಿಮೆಯಾಗಿದೆ.