ಅಲೈಯನ್ಸ್ ಏರ್ ನ ವಾಣಿಜ್ಯ ತಂಡ ಮೈಸೂರಿಗೆ ಭೇಟಿ ನೀಡಿ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೊಚ್ಚಿ ಮತ್ತು ಹೈದರಾಬಾದ್ ನಡುವಣ ವಿಮಾನ ಹಾರಟವನ್ನು ತಮ್ಮ ವ್ಯಾಪಾರ, ವಹಿವಾಟುಗಳಿಗೆ ಬಳಸಿಕೊಳ್ಳುವಂತೆ ಕೈಗಾರಿಕೋದ್ಯಮಿಗಳು, ಪ್ರವಾಸೋದ್ಯಮ, ಹೊಟೇಲ್ ಉದ್ಯಮಿಗಳು ಮತ್ತು ಇನ್ನೂ ಹಲವರೊಂದಿಗೆ ಮಾತುಕತೆ ನಡೆಸಿದರು. ಅಧಿಕಾರಿಗಳು ಭೇಟಿ ನೀಡಿದ್ದನ್ನು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಸಿ ಮಂಜುನಾಥ್ ದೃಢಪಡಿಸಿದ್ದಾರೆ.