"ಸುಮಾರು 4.30 ರ ವೇಳೆಗೆ ನಮಗೆ ಎಚ್ಚರಿಕೆ ಸಂದೇಶ ಸಿಕ್ಕಿದೆ.ಅಗ್ನಿಶಾಮಕ ದಳ ಹಾಗೂ ಅರಣ್ಯ ಸಂರಕ್ಷಕರು ಒಳಗೊಂಡಂತೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತಂದು ಐದರಿಂದ ಆರು ಬೆಂಕಿ ನಂದಿಸುವ ಯಂತ್ರಗಳನ್ನು ಅಲ್ಲಿ ಅಳವಡಿಸಲಾಗಿದೆ.ಹೇಗಾದರೂ, ಗಾಳಿಯ ವೇಗ ಹೆಚ್ಚಿದ್ದ ಕಾರಣ ನಮಗೆ ಸಲಾವೆದುರಾಗಿತ್ತು. ಸತತ ಮೂರು ಗಂಟೆಗಳ ನಂತರ ಬೆಂಕಿಯನ್ನು ತಹಬಂದಿಗೆ ತರಲು ಸಾಧ್ಯವಾಗಿದೆ.ಬೆಟ್ಟದ ಪ್ರವೇಶಿಸಲಾಗದ ಸ್ಥಳದ ಕಾರಣದಿಂದಾಗಿ, ಬೆಂಕಿಯು ಕೆಳಗಿನಿಂದ ಮೇಲಕ್ಕೆ ಹರಡುತ್ತಿದ್ದಂತೆ, ಜ್ವಾಲೆಗಳನ್ನು ನಂದಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಮಯ ಹಿಡಿದಿತ್ತು." ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು) ಪ್ರಶಾಂತ್ ಕುಮಾರ್ ಕೆ ಸಿ ಹೇಳಿದ್ದಾರೆ.