ಕಳೆದ ವರ್ಷ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ವಿಧಾನಸಭೆ ಉಪ ಚುನಾವಣೆ ಹಾಗೂ ಈ ಬಾರಿಯ ಲೋಕಸಭೆ ಚುನಾವಣೆಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಾಂಗ್ರೆಸ್-ಜೆಡಿಎಸ್ ಕಣಕ್ಕಿಳಿಸುತ್ತಾ ಬಂದಿವೆ. ಅದು ಬಿಬಿಎಂಪಿ ಚುನಾವಣೆಗೆ ಕೂಡ ಅನ್ವಯವಾಗುತ್ತದೆ. ಕಾವೇರಿಪುರ ವಾರ್ಡ್ ನಿಂದ ಜೆಡಿಎಸ್ ಹಾಗೂ ಸಗಯಪುರ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪರಸ್ಪರ ಬೆಂಬಲ ನೀಡಲಿವೆ ಎಂದು ಜೆಡಿಎಸ್ ನಾಯಕ ಟಿ ಎ ಶರವಣ ತಿಳಿಸಿದ್ದಾರೆ.